#ಅನುವಾದ

ಬುದ್ಧ

0

ಕೇಳಿಸಿಕೊಳ್ಳುವವನಂತೆ ದೂರ ದೂರ ಬಹು ದೂರದ ಮೌನ… ಉಸಿರು ಬಿಗಿ ಹಿಡಿದು ಕಿವಿಗೊಟ್ಟರೂ ನಮಗೆ ಕೇಳದ ನಿಶ್ಯಬ್ಧ. ಅವನೊಂದು ನಕ್ಷತ್ರ. ಅಸಂಖ್ಯ ಬೃಹತ್ ತಾರೆಗಳು, ನಮ್ಮ ಕಣ್ಣಿಗೆ ಕಾಣದೆ, ಅವನ ಸುತ್ತುವರೆದಿದೆ. ಅವನೇ ಎಲ್ಲಾ. ಇಲ್ಲೆ ಸುಳಿದಾಡುತ್ತ ಅವನು ನಮ್ಮನ್ನು ನೋಡಲೆಂದು ಕಾಯೋಣವೇನು ನಾವು? ಅವನಿಗೇನಿದೆ ಆ ಬಿಸಾತು? ಕಾಲಿಗೆ ಬಿದ್ದರೂ, ನಾವು ಬೇಡಿದರೂ ಅವನು […]

#ಕವಿತೆ

ಮೋಹನ ಮುರಳಿ

0

ಮೋಹನ ಮುರಳಿ ಕೃಷ್ಣಾ ಬೆಳದಿಂಗಳಿನಾ ಸಂಜೆಯಲಿ ಕೊಳಲನಾದದ ಅಲೆಗಳು ರಾಧೆಯ ಮನವನು ಕಾಡುವುವು ಎಲ್ಲಿರುವೆ ಹೇಳು ಮುಕುಂದಾ || ಎಲ್ಲಿ ಹುಡುಕಿದರು ಕಾಣದಾಗಿರುವೆ ಕಾಣುವಾತುರದಿ ರಾಧೆಯ ಕಂಗಳು ಮುದ್ದಾಡುವಾತುರದಿ ಮನವು ವಿರಹದ ವೇದನೆಯಲಿ ರಾಧೆಯೂ || ಚಂದ್ರ ತಾರಾ ಚಕೋರಿ ಅಣಕಿಸಿ ನಿನ್ನ ಕೃಷ್ಣ ಎಲ್ಲಿ ಎಂದು ಕೇಳುತಿಹರು ಮೋಹನ! ಎಲ್ಲಿ ಕೃಷ್ಣ ನೀನೆಲ್ಲಿರುವೆ ಹೇಳೋ […]

#ಕವಿತೆ

ಕೃಷ್ಣಭಕ್ತರ ಕುಣಿತ

0

ಯಾವ ಘೋಷ ಇದು ಇದಕ್ಕಿದ್ದಂತೆ ಈ ಕನಕಾಂಬರಿ ಸಂಜೆಯಲಿ ? ತೇಲಿ ಹಾಯುತಿದೆ ಪರಿಮಳದಂತೆ ತುಂಬಿ ಹರಿವ ಈ ಗಾಳಿಯಲಿ ತಾಳಮೃದಂಗದ ಬಡಿತ ಹಬ್ಬುತಿದೆ ಹೃದಯಕೆ ಲಗ್ಗೆಯ ಹೂಡುತಿದೆ ಮೋಹಕ ಗಾನದ ಕಂಠದೇರಿಳಿತ ಜೀವಕೆ ಮರುಳನು ಕವಿಸುತಿದೆ ಯಾವ ಅಲೌಕಿಕ ಶ್ರುತಿಯಿದು, ಇದಕ್ಕೆ ಲೋಕವ ಹೂಡಿದರೇತಕ್ಕೆ? ಆರಿಹೋಗುತಿದೆ ಎಲ್ಲ ಧಗೆ ಈ ಪ್ರಾಣವೀಣೆಯ ನುಡಿತಕ್ಕೆ- “ರಾಮಹರೇ […]

#ಕವಿತೆ

ಜನ ನಾಯಕ

0

ಜನ ನಾಯಕ ನಡೆದಾಗ ಎಂಥಾ ನೆಲವೂ ನಡುಗುವುದು ಕಡಲಿನ ನೀರೂ ಬರಡುವುದು ಜನ ನಾಯಕ ಕುಳಿತಾಗ ಎಂಥಾ ಪೀಠವು ಕುಲುಕುವುದು ಸಿಂಹಾಸನವೂ ಅಲುಗುವುದು ಜನ ನಾಯಕ ನುಡಿದಾಗ ಎಂಥಾ ಸದ್ದೂ ಅಡಗುವುದು ಗುಡುಗು ಕೂಡ ನಿಲ್ಲುವುದು ಜನ ನಾಯಕ ನಕ್ಕಾಗ ಎಂಥಾ ಹೂವೂ ಅರಳುವುದು ಕಾಗದ ಕೂಡ ನರಳುವುದು ಜನ ನಾಯಕ ಅತ್ತಾಗ ಎಂಥಾ ಎದೆಯೂ […]

#ವ್ಯಕ್ತಿ

ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್

0

ಪ್ರತಿವರ್ಷದಂತೆ ಏಪ್ರಿಲ್ ಹದಿನಾಲ್ಕು ಬಂದು ಹೋಯಿತು. ಅಂಬೇಡ್ಕರ್ ಒಂದು ಆಚರಣೆಯಾಗಿ ಹದಿನಾಲ್ಕರಂದು ಕಾಣಿಸಿಕೊಂಡು ಕಣ್ಮರೆಯಾದರು! ಅಂಬೇಡ್ಕರ್ ಆತ್ಮವಿಶ್ವಾಸ ಮತ್ತು ಪ್ರತಿಭಟನೆಯ ಒಂದು ಪ್ರತೀಕ. ಸಾಮಾಜಿಕ ಹೋರಾಟದ ಒಂದು ದಿಕ್ಸೂಚಿ. ಅಧ್ಯಯನ ಮತ್ತು ಹೋರಾಟಗಳನ್ನು ಒಟ್ಟಿಗೇ ಅಂತರ್ಗತ ಮಾಡಿಕೊಂಡಿದ್ದ ಅಂಬೇಡ್ಕರ್‌ ಯಾವತ್ತೂ ನಮಗೆ ಅರಿವಿನ ಒಂದು ಮಾಧ್ಯಮವಾಗಬೇಕು; ಅಮಲಿನ ಅಸ್ತ್ರವಾಗಬಾರದು. ಅಂಬೇಡ್ಕರ್ ಕನಸಿನ ನಮ್ಮ ಸಮಾಜದ ಸ್ವರೂಪವನ್ನು […]

#ನಗೆ ಹನಿ

ತಪ್ಪು

0

ಮೇಷ್ಟ್ರು : “ಭಾರತದ ರಾಜಧಾನಿ ಯಾವುದು?” ಶೀಲಾ : “ಬೆಂಗಳೂರು” ಮೇಷ್ಟ್ರು : “ತಪ್ಪು ಉತ್ತರ ಕೊಡ್ತಿದ್ದಿ.” ಶೀಲಾ : “ಇಲ್ಲ ಸಾರ್ ನೀವು ತಪ್ಪು ಪ್ರಶ್ನೆ ಕೇಳಿದ್ರಿ… ಕರ್ನಾಟಕದ ರಾಜಧಾನಿ ಕೇಳಬೇಕಾಗಿತ್ತು.” *****

#ಕವಿತೆ

ರಾಮ ಅತ್ತ ಸೀತೆ ಇತ್ತ

0

ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ ಎನುತೆ ಕೋತಿ ದೂತೆ ಯಾದೆನೆ ||೨|| ಕಲಿಯ ಕೈಯ ಬಲಿಯು ಆದೆ ಸೀತೆ ಕೆಟ್ಟು ಹೋದೆನೆ ಅಡುಗೆ ಅಟ್ಟು ಉಡುಗೆ […]

#ಹನಿ ಕಥೆ

ಶಿವಲಿಂಗ

0

ಹಲಸಿನ ಕಾಯಿಗಳು ಮೈತುಂಬಾ ಜೋತಾಡುತ್ತಿದ್ದ ಹಲಸಿನ ಮರದ ಮುಂದೆ ಅವನು ನಿಂತಿದ್ದ, “ಇಷ್ಟು ಕಾಯಿ, ಹಣ್ಣುಗಳನ್ನು ಹೇಗೆ ಈ ಮರ ಹೊತ್ತು ನಿಂತಿದೆ ಗಾಳಿ, ಮಳೆ ಬಿಸಿಲಿನಲ್ಲಿ?” ಎಂದುಕೊಂಡ. ಒಡನೆ ಅವನಿಗೆ ನೆನಪಾದದ್ದು ಭಾರವೆಂದು ತಾನು ಬಿಚ್ಚಿಟ್ಟಿದ್ದ ಶಿವದಾರದ ಪುಟ್ಟ ಶಿವಲಿಂಗ. *****

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೫

0

ಜಂಗಮ ಹಸಿವೆಗೆ ಆಲಯ ಕಟ್ಟುವುದು ಬೇಕಿಲ್ಲ. ಆಜ್ಞೆಗೆ ರೊಟ್ಟಿ ಕಿವಿಗೊಟ್ಟಿದೆ ಮನಸು ಕೊಟ್ಟಿಲ್ಲ. ಜಂಗಮದ ಬಯಲಲಿ ಸ್ಥಿರ ಆಲಯ ಕಟ್ಟುತ್ತದೆ. ರೊಟ್ಟಿ ಅಳಿಯುತ್ತದೆ ಸೃಷ್ಟಿಯಂತಿಮ ಸತ್ಯದ ಸ್ಥಾವರ ಉಳಿಯುತ್ತದೆ. *****