ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

‘ಸಂಚಯ’ ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍


ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

ಸಾಹಿತ್ಯ

ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.

ಸಂಶೋಧನೆ

ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.

ಅಧ್ಯಯನ

ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.

ಸಮುದಾಯ

ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.
ಕಿಟ್ಟಲ್ ಕೋಶದಲ್ಲಿ ಇಣುಕಿ/ಹುಡುಕಿ ನೋಡಿ

ಕಿಟ್ಟಲ್ ಕೋಶದಲ್ಲಿ ಇಣುಕಿ/ಹುಡುಕಿ ನೋಡಿ

‍ಡಿಜಿಟಲೀಕರಣದ ಕೆಲಸಗಳಿಂದ ಏನು ಪ್ರಯೋಜನ? ಯಾರಿ‍ಗೆ? ಏಕೆ? ‍ಹೇಗೆ? ಕನ್ನಡ ಸಂಚಯ Sanchi Foundation ಕೆಲಸಗಳನ್ನು ಸ್ವಂತಕ್ಕೆ ಬಳಸಿ ನೋಡಿ, ‍ಬೇರೆಯವರಿಗೆ ಮೂ‍ಲ ‍ಕೊಂಡಿಯೊಂ‍ದಿಗೆ ಹಂ‍ಚಿ ಖುಷಿಪಡಿ. ಬೆಂಬ‍ಲಿಸಿ ‍#KittleKosha #SearchInKittleKosha #ServantsOfKnowledge #ಕಿಟ್ಟಲ್ಕೋಶ ‍#kannada #digitization...

read more
ಗೌರೀಶ್ ಕಾಯ್ಕಿಣಿ ಸಂಚಯ

ಗೌರೀಶ್ ಕಾಯ್ಕಿಣಿ ಸಂಚಯ

‍ಕರ್ನಾಟಕದ ಹೆಸರಾಂತ ಬಹುಮುಖಿ ಲೇಖಕರು, ಬಹು ಭಾಷಿಕ ವಿದ್ವಾಂಸರು, "ಬೆಳಕು", "ಜನಸೇವಕ" ಪತ್ರಿಕೆಗಳ ಸಂಪಾದಕರು ಮತ್ತು ಶಿಕ್ಷಕರು ಆಗಿದ್ದ ವೈಚಾರಿಕ ಸಾಹಿತ್ಯದ ಪ್ರಮುಖ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ. ಅವರ ಪುತ್ರ ಜಯಂತ ಕಾಯ್ಕಿಣಿಯವರು ಸಂಚಿ ಫೌಂಡೇಶನ್ ‍®‍ ಹಾಗೂ ಸಂಚಯದ,...

read more
ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯ ಡಿಜಿಟಲೀಕರಣ

ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯ ಡಿಜಿಟಲೀಕರಣ

‍ ಕನ್ನಡದ ಪ್ರಸಿದ್ಧ ‍ಲೇಖಕ‍, ವಿಮರ್ಶಕ, ಪ್ರಭಂದಕಾರ, ‍‍ಅಧ್ಯಾಪಕರೂ‍ ಆಗಿದ್ದ ‍ಪ್ರೊ. ಬಿ. ಎಚ್. ಶ್ರೀಧರರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ‍ ಅವರ ಕುಟುಂಬದವರು ಬಿಡುಗಡೆ‍ಗೊಳಿಸಿದ್ದಾರೆ. ಸಂಚಿ ‍ಹಾಗೂ ಸಂಚಯ ಈ ಕಾರ್ಯವನ್ನು ಪೂರ್ಣಗೊಳಿಸಲು ಸಹಕರಿಸಿದ್ದಕ್ಕೆ ಅವರಿಗೆ ಹೃತ್ಪೂರ್ವಕ ‍ಧನ್ಯವಾದಗಳು. ಅವ‍ರ ಸಮಗ್ರ...

read more
ಕುಡ್ಪಿ ವಾಸುದೇವ ಶೆಣೈ ಪುಸ್ತಕಗಳ ಡಿಜಿಟಲೀಕರಣ

ಕುಡ್ಪಿ ವಾಸುದೇವ ಶೆಣೈ ಪುಸ್ತಕಗಳ ಡಿಜಿಟಲೀಕರಣ

‍ಕುಡ್ಪಿ ವಾಸುದೇವ ಶೆಣೈ ಅವರ ಪ್ರಭಾತ್ ಪ್ರಿಂಟರ್ಸ್ ಮೂಲಕ ಪ್ರಕಟಣೆಗೊಳ್ಳುತ್ತಿದ್ದ, ಒಂದಾಣೆ ಮಾಲೆಯ ೨೨೦ಕ್ಕೂ ಹೆಚ್ಚು ‍‍ ಪುಸ್ತಕಗಳನ್ನು ‍ಅವರ ಸುಪುತ್ರ ಕುಡ್ಪಿ ರಾಜ್ (ಕುಡ್ಪಿ ರಜನೀಕಾಂತ ಶೆಣೈ) @Kudpi Raj - ಸಂಚಯದ ಕನ್ನಡ ಪುಸ್ತಕ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಿಸಲು ಸಹಕರಿಸಿದ್ದಾರೆ. ಈ ಪುಸ್ತಕಗಳನ್ನು ಈಗ...

read more

Year 2020 for Kannada Digitization

(Initial Draft for 2020) Year 2020 for Kannada Digitization has been really great irrespective of the pandemic that grounded many of us across the globe. At Sanchaya we were able to take up the most awaited digitisation projects that were lined up since Jan 2020.     ...

read more
ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ

ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ

ಕನ್ನಡದ ಪುಸ್ತಕಗಳ ಡಿಜಿಟಲ್ ಸಂಚಯದ ಜೊತೆಗೆ‍, ಇಂಟರ್ನೆಟ್ ಆರ್ಕೈವ್‌ನಲ್ಲಿದ್ದ ತುಳು ಮತ್ತು ಕೊಂಕಣಿ ಪುಸ್ತಕಗಳಿಗೊ ಒಂದೊಂದು ತಾಣ.‍.. ನಿಮಗೆ ಖುಷಿಯಾಗುವಷ್ಟು ಹಂಚಿಕೊಳ್ಳಿ. ಕೊಂಕಣಿ ಸಂಚಯ - https://konkani.sanchaya.net‍ ತುಳು ಸಂಚಯ -...

read more