ಇಲ್ಲ! ಬರಲಿಲ್ಲ!

ಇಲ್ಲ !
ಬರಲಿಲ್ಲ
ಆ ದಿನ ಬರಲಿಲ್ಲ.

ಸಾಲು ಸಾಲು ಮೇಘ, ಮಾರುತಗಳ ಬರಳೊರಳಿಸಿ
ಗುಡುಗು, ಮಿಂಚುಗಳ
ಬಾಣ, ಬಿರುಸಿನ ಮಾಲೆ ಹೊತ್ತಿಸಿ
ಗಿಡ, ಮರಗಳ ಬುಡ ನಡುಗಿಸಿ
ತಲೆ ಕೊಡವಿಸಿ
ಏಕಕಾಲಕೆ ಗಲಿಬಿಲಿ, ಸಂತಸ ಹುಟ್ಟಿಸಿ
ಜನ, ದನ, ಕ್ರಿಮಿ, ಕೀಟ ಪಕ್ಷಿಗಳ ತಾರಾಡಿಸಿ
ಬಾನು, ಭುವಿಯನು ಬೆಸೆವ ಕೆಂದೂಳ ಸೇತುವೆಯನೆಬ್ಬಿಸುವ
ಮಳೆ ಗಾಳಿ ನೀನು ಬರಲಿಲ್ಲ.

ಬಯಲು, ಬೇಲಿ, ತಬ್ಬಿ
ಬಣ್ಣ ಗಂಧವ ರುಬ್ಬಿ
ಕಣ್ಮನಕೆ ಹಬ್ಬ ತರುವ
ಭಾದ್ರಪದ ನೀನು
ಬರಲಿಲ್ಲ

ಪ್ರೇಮ ಚುಂಬನದಿ
ಮಿಂಚು ರೋಮಾಂಚನವ ಸ್ಪುರಿಸಿ
ನವ, ನವ ಭಾವಗಳ ಚಿಗುರು ಉಡಿಸಿ
ಕಣಿವೆ ಕೊಳ್ಳಗಳಲಿ
ಕೋಗಿಲೆಗಳ ಮಧುರ ಗಾನವ ಮೊಳಗಿಸಿ
ಕನಸುಗಳ ತೇಲಿಬಿಡುವ
ಬಾಲ ಗ್ರೀಶ್ಮನು ನೀನು ಬರಲಿಲ್ಲ.

ಮಧುರ ಪರಿಮಳದ
ಮುಂಗಾರು ಮಲ್ಲಿಗೆಯ
ಮೊಗ್ಗಿನ ಮುಖದಲ್ಲಿ
ಮುಗುಳು ನಗೆ ತೇಲಿಸುವ
ಸಂಜೆ ಗಾಳಿ ನೀನು ಬರಲಿಲ್ಲ.

ನನ್ನಾಸೆ ಹೂವುಗಳು
ಕಾಯಾಗಿ ಹೊರೆಯಲು, ಹಣ್ಣಾಗಿ ಮಾಗಲು
ತಹತಹಿಪ
ಅನುರಾಗ ಪರಾಗ ನಿಯೋಗಿ ನೀನು ಬರಲಿಲ್ಲ.

ಹಸಿದು
ಕಂಗಾಲಾಗಿ
ಕೀಚ್ ಕೀಚೆನುತ ತಪಿಸುವ
ಗೂಡಿನ ಮರಿಗಳಿಗೆ
ಜೀವ ಗುಟುಕನು ತರುವ
ತಾಯಿ ಹಕ್ಕಿ ನೀನು
ಬರಲಿಲ್ಲ.

ಜಗವ ಕವಿದಿರುಳ ಮೇಲೆ
ಬೆಳಕ ದಾಳಿ ನಡೆಸಿ
ಸೋತ ತಾರಾ ಕುಲವ
ಮುನ್ನಡೆಸಿ ಗೆಲುವ
ಚಂದ್ರಿಕೆ ನೀನು
ಬರಲಿಲ್ಲ.
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವಳೊಬ್ಬಳು ಅಹಲ್ಯೆ
Next post ಒಂದೆ ತರ್ಕದಳೆಯೊಳಗೆಲ್ಲ ವಿಷಯಗಳಿರುವುದೆಂತು ?

ಸಣ್ಣ ಕತೆ

  • ಲೋಕೋಪಕಾರ!

    -

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… ಮುಂದೆ ಓದಿ.. 

  • ಸ್ನೇಹಲತಾ

    -

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… ಮುಂದೆ ಓದಿ.. 

  • ಮೌನರಾಗ

    -

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… ಮುಂದೆ ಓದಿ.. 

  • ನಾಗನ ವರಿಸಿದ ಬಿಂಬಾಲಿ……

    -

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… ಮುಂದೆ ಓದಿ.. 

  • ಕರಾಚಿ ಕಾರಣೋರು…

    -

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… ಮುಂದೆ ಓದಿ..