#ಹನಿಗವನ

ಘಾಟಿ ಹೆಂಗಸು

0

ಮೆಲ್ಲ ಮೆಲ್ಲನೆ ಬಂದನೇ ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತುಕೊಟ್ಟು ನಿಲ್ಲದೇ ಓಡಿ ಹೋದ ಕಳ್ಳಗೆ ಬುದ್ಧಿ ಹೇಳೇ ಅಂತ ಕೋಪದಲ್ಲಿ ಗೋಪಮ್ಮನ ಹತ್ರ ಹೋಗಿ ಮಾಡಿದರೆ ಡ್ಯಾನ್ಸು ನಿಮ್ಮ ಕೋಪ ಯಾತಕ್ಕೆ ಗಲ್ಲಕ್ಕೆ ಮುತ್ತು ಕೊಟ್ಟಿದ್ದಕ್ಕೋ? ಅಥವಾ ನಿಲ್ಲದೇ ಓಡಿ ಹೋದದ್ದಕ್ಕೋ? ಅಂತ ಕೇಳಿಬಿಡೋದೇ ಘಾಟಿ ಹೆಂಗಸು. *****

#ಕವಿತೆ

ಚಿಂತಲ್ ಬಸ್ತಿ

0

ಚಿಂತಲ್ ಬಸ್ತಿ ಚಿಂತಲ್ ಬಸ್ತಿ ಬಡವರ ಬಗ್ಗರ ಅಗ್ಗದ ಆಸ್ತಿ ಸ್ವರ್ಗಕ್ಕಿಂತಲೂ ನೀನೇ ಜಾಸ್ತಿ ರಾಮುಡು ಭೀಮುಡು ಪರಮೇಶ್ವರುಡು ಕಾಜಿಬಿ ಗೀಜೀಬಿ ಗೊರಿಬಿಗೆಲ್ಲಾ ಎಲ್ಲರಿಗೂ ಇದು ಒಂದೇ ಮಾಡು ಇರುವಂತೆಲ್ಲರಿಗೊಬ್ಬನೆ ಅಲ್ಲಾ! ಆಚೆಗೆ ಬಯಲು ಈಚೆಗೆ ರೈಲು ಕೈಕಾಲಿಟ್ಟಲ್ಲೆಲ್ಲಾ ಕೊಳಚೆ ಆದರು ಬದುಕು ಸಾಗಲೆಬೇಕು ಹೊಯ್ಯಲೆ ಬೇಕು ಬಂದರೆ ಉಚ್ಚೆ ಚಿಂತಲ್ ಬಸ್ತಿ ಚಿಂತಲ್ ಬಸ್ತಿ […]

#ಕವಿತೆ

ಪಾರಿವಾಳಗಳು ಹಾರಿಹೋದವು

0

ನನ್ನ ದೇಶದ ಗಾಳಿ ಪಕ್ಕದ ದೇಶಕ್ಕೂ ಬೀಸಿತು ಬೀಸುವಾಗ ಇಲ್ಲಿನ ತಣ್ಣನೆಯ ಪ್ರೇಮದ ಬಿಸಿಯುಸಿರನ್ನು ಹೊತ್ತೊಯಿತು ನನ್ನ ದೇಶದ ಬೆಳಕು ಪಕ್ಕದ ದೇಶಕ್ಕೂ ಪಯಣ ಬೆಳೆಸಿತು ಹೋಗುವಾಗ ಒಂದಿಷ್ಟು ಅರಿವು ನೋವುಗಳನ್ನು ಹೊತ್ತೊಯಿತು ಗಾಳಿ ಬೆಳಕುಂಡ ಜನ ಅಲ್ಲಿ ಇಲ್ಲಿಯ ಸುದ್ದಿ ಮಾತಾಡಿದರು ಆದರೆ ಎರಡು ಕಡೆ ಸೇನೆಯಲ್ಲಿನ ದಂಡನಾಯಕರು ಕಿಡಿಕಿಡಿಯಾದರು ಗಾಳಿ ಬೆಳಕುಗಳು ತಂದ […]

#ನಗೆ ಹನಿ

ಹಚ್ಚಿಕೊಳ್ಳಬೇಡ

0

ತಿಮ್ಮ :- ಸಾರ್ ನಿನ್ನೆಯಿಂದ ವಿಪರೀತ ಹುಷಾರಿಲ್ಲ… ಡಾ!! ಸೀನ :- ಅದನ್ನೆಲ್ಲಾ ಯಾಕೆ ತಲೆಗೆ ಹಚ್ಚಿಕೊಳ್ಳಿರಾ? ತಿಮ್ಮ :- ಸಾರ್ ನನಗೆ ಬೇದಿ.. ಅದನ್ನು ಯಾರು ತಲೆಗೆ ಹಚ್ಚಿಕೊಳ್ತಾರೆ ಹೇಳಿ.. *****

#ಕವಿತೆ

ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ

0

ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ ನೋಡೀಕಿ ಸಣ್ಣಾಕಿ ನಕ್ಕಾಳಾ ಗಿಡತುಂಬ ಗಿಳಿಯಾಕ ನೆಲತುಂಬ ಹೊಳಿಯಾಕ ಚನ್ನಂಗಿ ಹೂವಾಗಿ ಹೊಕ್ಕಾಳಾ ||೧|| ಸುರ್ರೆಂದು ಕಡದಾಂಗ ಕೆನಿಮೊಸರು ನಕ್ಕಾಂಗ ಈ ಹುಡಿಗಿ ಬೆಣ್ಯಾಗಿ ಜಿಗದಾಳಾ ಕೊಕ್ಹೊಕ್ಕ ಕ್ಯಾಕೀಯ ಯಕ್ಕೀಯ ಕೊಕ್ಕೀಯ ಹಾಕ್ಯಾಳ ಕೌವ್ವಂತ ಕೂಗ್ಯಾಳಾ ||೨|| ಎದಿತುಂಬ ತತ್ರಾಣಿ ಉತ್ತಮರ ಉತ್ರಾಣಿ ಚಂದುಳ್ಳಿ ಬೋಗೂಣಿ ಈ ಹೆಣ್ಣಾ ಹೊಸಗಿಣ್ಣ ವಡಿಬಣ್ಣ […]

#ಹನಿ ಕಥೆ

ಬಂಗಲೆಯ ಭಾಗ್ಯ

0

ಅವನು ಐವತ್ತು ಲಕ್ಷದ ಬಂಗಲೆಯ ಒಡೆಯನಾಗಿದ್ದ. ಅವನಲ್ಲಿ ಷೇರು, ಕಾರು ಎಲ್ಲಾ ಇದ್ದಿತು. ಮಡದಿ ಸತ್ತಮೇಲೆ ಮರುಮದುವೆ ಮಾಡಿಕೊಳ್ಳಲು ಇಷ್ಟ ಪಟ್ಟು ತನಗೆ ೫೮ ವರ್ಷವೆಂದು ಸುಳ್ಳು ಹೇಳಿ ಮದುವೆಯಾದ. ನಂತರ ಅವಳಿಗೆ ತಿಳಿದ ಸತ್ಯ ಅವನು ರೋಗಗ್ರಸ್ಥ ಮುದುಕನೆಂದು, ಕೆಲವೇ ತಿಂಗಳಲ್ಲಿ ಅವಳಿಗೆ ಮಾಂಗಲ್ಯ ಭಾಗ್ಯ ಹೋಗಿ ಬಂಗಲೆಯ ಭಾಗ್ಯ ಮಾತ್ರ ಉಳಿಯಿತು. ಬಂಗಲೆಯಲ್ಲಿ […]

#ಕವಿತೆ

ಭೂಕಂಪದ ಬದುಕು

0

ಬದುಕುವುದು ಭೀಕರವೆಂದರೆ ನಿಜವೆನ್ನೋಣ; ಆದರೆ ಸಾವೂ ಭೀಕರವಾಗಬೇಕೆ? ಕರೆದುಕೊಂಡಂತೆ ಸೀತೆಯನ್ನು ಭೂಮಿ ಅಮ್ಮನಾಗಬಾರದೇಕೆ? ಸಾಯಿಸುವುದಕ್ಕೂ ಸಿಟ್ಟಾಗಿ ಆಕೆ ಕೆಂಡಮಂಡಲವಾಗಬೇಕೆ? ಸಿಟ್ಟೆಂದರೆ ಎಂಥ ಸಿಟ್ಟು! ಹಾವಂತೆ ಹರಿದಾಡಿದ ಗುಟ್ಟು ಸಾವಿನ ಎಡೆ ಕೇಳುತ್ತ ಹೆಡೆಯತ್ತಿ ಬುಸ್ಸೆಂದು ಬಿರುಕು ಬಿಟ್ಟಾಗ ಅಂತಃಕರಣದ ಆಪೋಶನ ವಿಷನರ್ತನ! ಕುಣಿದ ಕಾಲ್ತುಳಿತಕ್ಕೆ ನೆಲ ನೆತ್ತರ ಕಾರಿತು ಕತ್ತಲೆಯಿಂದ ಬೆಳಕಿಗೆ ಬೆಳಕಿನಿಂದ ಕತ್ತಲೆಗೆ ಕಟ್ಟಿದ […]

#ಕವಿತೆ

ಏನೇ ಬಂದರೂ

0

ಏನೇ ಬಂದರೂ ಎದುರುಸಿ ಸಾಗುವ ಆತ್ಮವಿಶ್ವಾಸವ ನೀಡೆನಗೆ ದೇವಾ| ಕರುಣಿಸಿ ನಿನ್ನ ಕರುಣೆಯ ಕವಚವ ಸದಾ ಕಾಯೆನ್ನ ಜೀವ|| ಹಸಿದ ಹೆಬ್ಬುಲಿ ಗರ್ಜಿಸಿದಂತೆ ಗರ್ಜಿಸಲಿ ಬಾಳ ಕೆಡುಕು| ಕಡಲುಬ್ಬರಿಸಿ ಅಬ್ಬರಿಸುವಂತೆ ಅಬ್ಬರಿಸಲಿ ಬದುಕು| ಕಾರ್ಮೋಡ ಕವಿದು ಮಿಂಚು, ಗುಡುಗು, ಬರಸಿಡಿಲುಗಳು ಆರ್ಭಟಿಸುವಂತೆ ಆರ್ಭಟಿಸಲಿ ಜೀವನ| ನಿನ್ನೊಂದು ಕರುಣೆಯ ಕಿರಣ ಆಶಾಕಿರಣವಾಗಿರಲು ಭಯಪಡೆನು ನಾನು|| ಸಾವಿಗೆದರದೆ, ಅಧರ್ಮಕ್ಕಂಜದೆ, […]

#ವಿಜ್ಞಾನ

ಅಂತರೀಕ್ಷಲ್ಲೊಂದು ನಗರ

0

ನೆಲದಾಳದಲ್ಲಿ, ಸಾಗರದಾಳದಲ್ಲಿ ನಗರಗಳನ್ನು ನಿರ್ಮಿಸಿ ಯಾವ ಸಮೆಸ್ಯೆಗಳೂ ಇಲ್ಲದಂತೆ ಬದುಕುವ ವ್ಯವಸ್ಥೆಯನ್ನು ಅಮೇರಿಕ, ಜಪಾನಗಳಂತಹ ಮುಂದುವರೆದ ರಾಷ್ಟ್ರಗಳು ಮಾಡುತ್ತಲಿವೆ. ಜನಸಾಂದ್ರತೆ ಪರಿಸರ ನೈರ್ಮಲ್ಯತೆಗಳನ್ನು ಈ ಪ್ರದೇಶಗಳಲ್ಲಿ ಕಾಪಾಡಿ ಕೊಳ್ಳುಬಹುದೆಂಬ ಆಶಯ ಇವರದು. ಇದೀಗ ಅಂತರೀಕ್ಷದಲ್ಲಿ ನಿಸರ್ಗ ಸಹಜವಾದ ವಾತಾನುಕೂಲ ವ್ಯವಸ್ಥೆ ಹೊಂದಿ ನಗರಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ. ಈ ನಗರದ ಸುತ್ತಲೂ ಗಾಜಿನಗೊಳವನ್ನು ಮಾಡಲಾಗಿದ್ದು ಸೂರ್ಯನ ಚಲನೆಯನ್ನು ಅನುಸರಿಸಿ […]